ಪೋಸ್ಟ್‌ಗಳು

2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಮ್ಮ ಮಾತು ಕೇಳಿಸಿಕೊಳ್ಳುವಷ್ಟು ಅವರಿಗೆಲ್ಲಿ ತಾಳ್ಮೆ?

ಇಮೇಜ್
 ಹೊಸ್ತಿಲಾಚೆ ಬೆತ್ತಲೆ - 12 ಅವಳು ಹತ್ತನೇ ಕ್ಲಾಸ್. ಇನ್ನೊಂದು ಆರು ತಿಂಗಳು ಹೀಗೆ ದಾಟಿದರೆ ಹದಿನಾರು ದಾಟುತ್ತದೆ. ಏನೂ ಆರಿಯದ ಹುಡುಗಿಯೇನಲ್ಲ! ಅವಳಿಗೊಬ್ಬ ತಮ್ಮನಿದ್ದಾನೆ. ಏಳನೇ ಕ್ಲಾಸ್. ದೊಡ್ಡದಾಗಿ ಹೆಸರು ಮಾಡಿದ ದೊಡ್ಡ ಖಾಸಗಿ ಶಾಲೆಯಲ್ಲಿ ಓದು. ದೊಡ್ಡ ಖಾಸಗಿ ಶಾಲೆಗೆ ತಿಜೋರಿಯಲ್ಲಿ ಹೆಚ್ಚು ಹಣವಿರುವವರೇ ಸೇರಿಸುವುದು. ಅವರಪ್ಪನ ಕೆಲಸ ವಕೀಲಿಕೆ. ತಾಯಿ ಸರ್ಕಾರಿ ಹೈಸ್ಕೂಲ್‍ನಲ್ಲಿ ಕನ್ನಡ ಪಾಠ ಹೇಳುತ್ತಾರೆ. ಬಂಗ್ಲೆ, ಮನೆ ಕೆಲಸ ಮಾಡಿ ಹೋಗಲಿಕ್ಕೆ ಆಳುಗಳನ್ನು ಗುರ್ತು ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ನಂಗ್ಹೇಗೆ ಗೊತ್ತಾಯ್ತು ಅಂದ್ಕೊಂಡ್ರಾ!? ದಿನ ಅವರ ಮನೆ ಮುಂದೆ ಸ್ಕೂಲ್ ಬಸ್ ನಿಲ್ಲಿಸಿ ಹತ್ತಿಸಿಕೊಂಡು ಹೋಗುವವನು ನಾನೇ. ಆದ್ದರಿಂದ ನಮ್ಮ ಬಸ್‍ಗೆ ಬರುವ ಮಕ್ಕಳ ಮನೆಯ ಹಿಸ್ಟರಿ ಬಗ್ಗೆ ಒಂಚೂರು ತಿಳಿದುಕೊಂಡಿರ್ತಿನಿ. ಇದುವರೆಗೂ ಅವರ ಮನೆಯವರು ಯಾರೂ ಬಸ್ ಬಂದಾಗ ಹತ್ತಿಸಿ ಹೋಗಿದ್ದು ನಾ ಕಂಡಿಲ್ಲ. ಅಕ್ಕನೇ ತಮ್ಮನನ್ನು ಕೈ ಹಿಡಿದುಕೊಂಡು ಅವನ ಬ್ಯಾಗ್‍ನ್ನು ಇವಳೇ ಹೊತ್ತುಕೊಂಡು ಹತ್ತಿಬಿಡುತ್ತಾಳೆ. ವಿಷಯವೆಂದರೆ ಸ್ವಲ್ಪ ಅಂತರ್ಮುಖಿ ಹುಡುಗಿ. ಈ ನಡುವೆ ಸ್ವಲ್ಪ ಸೋತಂತೆ ಕಾಣುತ್ತಿದ್ದಳು. ಬಸ್ ಹತ್ತುವಾಗಲೇ ಕಣ್ಣು ತುಸು ಕೆಂಪಾಗಿ ಊದಿಕೊಂಡಿರುವಂತೆ ಕಾಣುತ್ತಿದ್ದವು. ಅವಳು ಅತ್ತಿರುವ ಕುರುಹುಗಳೇ ಅವು! ಹುಡುಗಿ ಅಳುವಂತದ್ದು ಏನಾಗುತ್ತಿದೆ? ಏನಾದರೂ ಸಮಸ್ಯೆಯಾ? ಯಾರದಾದರೂ ಕಾಟವಾ? ಎಂದು ಎಷ್ಟೋ ಬಾರಿ ನನ್ನಷ್

ಮಗನ ನೋಟ ‘ಯಾಕೆ ಬಂದೆ?’ ಅನ್ನುವ ಹಾಗಿತ್ತು!

ಇಮೇಜ್
ಹೊಸ್ತಿಲಾಚೆ ಬೆತ್ತಲೆ - 11 ನಾನು ಈ ನಡುವೆ ದಿನಾ ರಾತ್ರಿ ಒಂದು ಬಾಳೆ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದೇನೆ. ‘ಗುಡ್ ಒಳ್ಳೆ ಅಭ್ಯಾಸ ಕಣಯ್ಯಾ!’ ಅಂದ್ಕೊಂಡ್ರಾ? ಇಲ್ಲ ಖಂಡಿತ ಇಲ್ಲ. ‘ನೋಡಿ ಇವ್ರೆ ನಿಮಗೆ ಸ್ವಲ್ಪ ಜೀರ್ಣಶಕ್ತಿಯ ಸಮಸ್ಯೆ ಇದೆ. ಡೈಲಿ ರಾತ್ರಿ ಒಂದು ಬಾಳೆ ಹಣ್ಣು ತಿನ್ನಿ’ ಅಂತ ಯಾರೊ ಡಾಕ್ಟರ್ ಹೇಳಿರಬೇಕು ಅಂದ್ಕೊಂಡ್ರಾ? ಇಲ್ಲ ಅದು ಕೂಡ ಅಲ್ಲ. ಬಾಳೆ ಹಣ್ಣು ತಿನ್ನಲೇ ಬೇಕು ಅನ್ನೋದು ನನ್ನ ಉದ್ದೇಶವಲ್ಲ. ಎಲ್ಲಾದರೂ ಪರವಾಗಿಲ್ಲ ಅಂಗಡಿಗಳು ಸಿಕ್ಕಾಗಲೆಲ್ಲಾ ತಿಂದುಬಿಡ್ತಿನಿ ಅಂತಾನೂ ಅಲ್ಲ. ನಿತ್ಯ ಆ ಅಂಗಡಿಯಲ್ಲಿಯೇ ಬಾಳೆ ಹಣ್ಣು ತಿನ್ನಬೇಕು ಅಂದ್ಕೊಂಡಿದೀನಿ ಆ ಅಂಂಗಡಿಯಲ್ಲಿಯೇ! ನನ್ನಿಂದ ಐದು ರೂಪಾಯಿ ವ್ಯಾಪಾರ ಆಗುತ್ತಲ್ಲ ಆ ಕಾರಣಕ್ಕೆ! ಅಂಗಡಿ!? ಛೇ ಹಾಗೆ ಕರೆದರೆ ಪ್ರಮಾದವಾದೀತು! ಒಂದೊಂದು ಗಾಲಿಯಲ್ಲಿ ಏಳೇಟು ಕಡ್ಡಿಗಳು. ಹಾಗೆ ಕಡ್ಡಿಗಳಿರುವ ನಾಲ್ಕು ಗಾಲಿಗಳು. ಗಾಲಿಯಲ್ಲಿ ಟೈರ್ ಇದಾವೋ ಇಲ್ಲವೋ ನಾನು ನಿಖರವಾಗಿ ಹೇಳಲಾರೆ. ದಪ್ಪದಪ್ಪನೆಯ ಏಳೆಂಟು ಕಲ್ಲುಗಳನ್ನು ತಂದು ಅದಕ್ಕೆ ಒಡ್ಡಿ ನಿಲ್ಲಿಸಲಾಗಿದೆ. ತಳ್ಳು ಗಾಡಿ ರೀ! ಆದರೆ ತಳ್ಳಲು ಬಾರದು. ಅದಕ್ಕೆಂದೆ ಫುಟ್‍ಪಾತ್ ಮೇಲೆ ಒಂದೆಡೆ ಕಲ್ಲುಗಳನ್ನು ಆನಿಸಿ ನಿಲ್ಲಿಸಲಾಗಿದೆ. ಅದರ ಮೇಲೆ ಚಿಕ್ಕ ಗುಡಿಸಲಿನಂತೆ ಹರಕು ಮುರಕು ತಗಡು, ಪ್ಲೇವುಡ್‍ಗಳಿಂದ ಅಕ್ಕ ಪಕ್ಕ ಮತ್ತು ಮೇಲಿನ ಹೊದಿಕೆ. ಒಳಗೆ ಪೆಪ್ಪರಮೆಂಟು, ಬೋಟಿ, ಚಾಕಲೇಟ್, ಅಡಿಕೆ ಪಟ್ಣ, ಸಿಗ

ಮಾದ್ರಿ

ಇಮೇಜ್
ಅವರು ಮುನಿಯಂತೆ! ಮುನಿಸಿಕೊಂಡು  ಕುಣಿದು ಕೊಟ್ಟರೇಕೆ? ಶಾಪವ  ಮುನಿತನ  ಸೋರಿ ಹೊಯಿತೆ!? ಮರ ಕೊಬ್ಬಿ  ಹೂ ಹಿಗ್ಗಿ ದುಂಬಿ ಸೆಳೆದು  ಬೀಜ ಕಟ್ಟುವುದೇ  ನಿಜ ಪ್ರಕೃತಿ; ಅದುವೆ ನ್ಯಾಯ! ನಿನ್ನ ಪ್ರಣಯಕೆ  ನೀ ಮರೆಸಿಕೊಂಡ ವೇಷ ಪಾಂಡುಗೇನು ಗೊತ್ತು? ಹೂಡಿದ ಹೊಡೆದ ‘ಸೇರಿದೊಡೆ ಸಾಯಿ’ ನೀವೇನೊ ಶಪಿಸಿದಿರಿ! ಪಾಂಡು ಉಂಡ ಅವರ ಬಾಣದ ಕರ್ಮಕೆ ನನ್ನದೇನು ತಪ್ಪು!? ಇನಿಯಗೆ  ಪ್ರಾಣ ಭಯವನ್ನಿಕ್ಕಿ ಯೌವ್ವನವ, ಸುಖವ ಬೋರಲು ಹಾಕಿದೇಕೆ? ಹೆಣ್ಣ ಗಣನೆಗೆ  ತಗೆದುಕೊಳ್ಳದ  ನಿನ್ನ ತಪಃಕೇನಿದೆ ನ್ಯಾಯದ ತೂಕ? ಒಬ್ಬರ ಕಾರಣದಿ  ಒಬ್ಬರ ಉಳಿಸಿವುದು ಬದುಕು; ಒಬ್ಬರಿಗಾಗಿ ಮತ್ತೊಬ್ಬರ  ಒಂಟಿ ಮಾಡುವುದಲ್ಲ! 

ನಮ್ಮ ಮನೆಯಲ್ಲಿ ಯಾರೋ ಹಸಿದಿದ್ದಾರೇನೊ ಅನ್ಸುತ್ತೆ ಸರ್!

ಇಮೇಜ್
ಹೊಸ್ತಿಲಾಚೆ ಬೆತ್ತಲೆ - 10 ಆಕೆಯ ಹೆಸರು ಭಾರ್ಗವಿ. ಪೇಸ್ಬುಕ್ ಲ್ಲಿ ಯಾವಾಗ ಪ್ರೆಂಡ್ ಆಗಿ ಬಿಟ್ಟಿದ್ದಳೊ ಗೊತ್ತಿಲ್ಲ! ಆದರೆ ಇಲ್ಲಿ  ವಿಷಯವೆಂದರೆ ಅವಳ ಪೋಸ್ಟಿಂಗ್ ಕುರಿತಾದದ್ದು. ಸಾಮಾನ್ಯವಾಗಿ ನಮಗೆಲ್ಲ ಒಂದು ಕ್ರೇಜ್ ಇರುತ್ತೆ. ನಮ್ಮ ಮನೆಯಲ್ಲಿ ಪ್ರೀತಿಯ ಬೆಕ್ಕು ಅಥವಾ ಚಂದದ ನಾಯಿ ಇನ್ಯಾವುದೋ ಪ್ರೀತಿಯಿಂದ ಸಾಕಿದ ಪ್ರಾಣಿಯ ಜೊತೆ ಸೆಲ್ಪಿಯೋ, ಅದರೊಂದಿಗಿನ ಒಡನಾಟದ ಫುಲ್  ಪೊಟ್ರೆಟ್ ಸೈಜಿನ ಪೋಟೊ ವನ್ನು ನಮಗೆ ಪ್ರಾಣಿಗಳ ಮೇಲೆ ಇರುವ ಪ್ರೀತಿಗಿಂತ ಎರಡುಪಟ್ಟು ತೋರ್ಪಡಿಕೆಗಾಗಿಯೇ ತೆಗೆದ ಪೇಸ್ಬುಕ್ ಗೆ ಸುರಿದು ಲೈಕ್ ಮತ್ತು ಕಾಮೆಂಟ್ ಗೆ ಕಾಯುತ್ತೇವೆ. ಆದರೆ ಆ ಹುಡುಗಿಯ ಪೋಸ್ಟಿಂಗ್ ನಾನು ತುಂಬಾ ದಿನದಿಂದ ಗಮನಿಸುತ್ತಲೇ ಇದ್ದೆ. ಆಕೆಯ ಪೋಸ್ಟಿಂಗ್ ನಲ್ಲಿ ನಾಯಿ ಕಡ್ಡಾಯವಾಗಿ ಇರುತ್ತಿತ್ತು. ಆದರೆ ಯಾವಾಗಲೂ ಅದೊಂದೇ ನಾಯಿಯಲ್ಲ. ಪ್ರತಿಸಾರಿಯೂ ಭಿನ್ನ! ಒಂದು ವಿಶೇಷವೆಂದರೆ ಅವೆಲ್ಲ ಬೀದಿನಾಯಿಗಳು ಅನಿಸುತ್ತಿತ್ತು. ಮರಿಗಳಿಂದ ಹಿಡಿದು ಮುದಿ ಹೆಣ್ಣುನಾಯಿಗಳ ವರೆಗೆ ಯಾವುದಾದರೂ ಒಂದು ಅಥವಾ ಹಲವುಗಳನ್ನು ಹಿಡುದುಕೊಂಡು ಊಟ ತಿನ್ನಿಸುತ್ತಲೋ, ಸ್ನಾನ‌ ಮಾಡಿಸುತ್ತಲೋ ಇರುವ ಫೋಟೊ ಕಾಣುತ್ತಿದ್ದೆ ನಾನು. ಇವೆಲ್ಲಕ್ಕಿಂತ ಮುಖ್ಯವಾಗಿ ಅವರನ್ನು ಸಂಪರ್ಕಿಸಿ ಮಾತನಾಡಸಬೇಕು ಅಂತ ಕುತೂಹಲ ಹುಟ್ಟುವಂತೆ ಮಾಡಿದ್ದು ಅಂದು ಅವರು ಎರಡು ನಾಯಿಮರಿಗಳೊಂದಿಗೆ  ಬರೆದುಕೊಂಡ ಒಂದು ಪೋಸ್ಟ್.                               

ಎಲ್ರಿಗೂ ಇರುವ ಅಪ್ಪ ನಂಗ್ಯಾಕಿಲ್ಲ!?

ಇಮೇಜ್
  ಹೊಸ್ತಿಲಾಚೆ ಬೆತ್ತಲೆ - 09 ಹೌದು, ಎಲ್ಲರಿಗೂ ಇರುವ ಅಪ್ಪ ನನಗೆ ಯಾಕಿಲ್ಲ!? ಮುದ್ದು ಹುಡುಗನ ಮನಸ್ಸಿನಲ್ಲಿ ಮುದ್ದು ಪ್ರಶ್ನೆ ಮೂಡಿತ್ತು. ತರಗತಿಯ ಪಾಠಗಳು, ಜೊತೆಗಿನವರ ಮಾತುಗಳು, ಅಲ್ಲಲ್ಲಿ ನೋಡುತ್ತಿದ್ದ ನೋಟಗಳು ‘ಅಪ್ಪ’ ಎನ್ನುವ ಒಂದು ಪಾತ್ರ ತನ್ನ ಜೀವನದಲ್ಲಿ ಏಕಿಲ್ಲ ಅನಿಸುವಂತೆ ಮಾಡಿತ್ತು. ಅದೇ ಮುಗ್ಧತೆಯಲ್ಲಿ ಬಂದು ಅಮ್ಮನನ್ನು ಕೇಳಿದ್ದ. ‘ಅಮ್ಮಾ, ಅಪ್ಪ ಎಲ್ಲಿ?’ ಏನು ಉತ್ತರ ಕೊಟ್ಟಾಳು!. ಉತ್ತರವೇ ಇಲ್ಲ ಅಂತಲ್ಲ. ಇಷ್ಟು ಬೇಗ ತನಗೆ ತಂದೆಯೇ ಇಲ್ಲ ಎಂಬ ಅರಿವು ಮಗನಿಗೆ ಏಕೆ ಎಂದು ಅದನ್ನು ಹಾಗೆ ಹಿಡಿದಿಟ್ಟಿದ್ದಳು. ತಾನು ಆರು ತಿಂಗಳು ಗರ್ಭಿಣಿಯಾಗಿದ್ದಾಗ ಗಂಡನಿಗೆ ಜ್ವರ ಬಂದಿದ್ದೆ ನೆಪವಾಗಿ ಹತ್ತು ಹದಿನೈದು ದಿನಗಳ ಸರ್ಕಾರಿ ಆಸ್ಪತ್ರೆಯ ವಾಸದಲ್ಲಿ ಒಂದು ದಿನ ಇದ್ದಕ್ಕಿಂದ ಹಾಗೆ ಸತ್ತು ಹೋಗಿದ್ದ. ಹೊಟ್ಟೆಯೊಳಗಿನ ಮಗು ಅನಾಥವಾಗಿತ್ತು. ತವರು ಸೇರಿ ಹಡೆದು, ಮಗುವನ್ನು ಜತನ ಮಾಡಿಕೊಂಡು ಬದುಕಿದ್ದಳು. ಅತ್ತಿಗೆಯ ಮಾತುಗಳಿಂದ ಅಲ್ಲಿಂದ ಹೊರ ಬಂದು ಸ್ವಂತಕ್ಕೆ ಬದುಕಿದ್ದಳು. ಗಂಡನ ಮನೆಯಿಂದಲೂ ಆಸ್ತಿಯ ಕಾರಣಕ್ಕೆ ತಳ್ಳÀಲ್ಪಟ್ಟಿದ್ದಳು. ಯೌವ್ವನ ಇನ್ನೂ ಹಸುರಾಗಿರುವ ಕಾರಣ ತಿನ್ನುವ ಕಣ್ಣುಗಳಿಂದ ಪಾರಾಗುವುದೇ ಸವಾಲಾಗಿತ್ತು. ಹೇಗೋ ಮಗುವನ್ನು ಚನ್ನಾಗಿ ಸಾಕುವ ಹಠಕ್ಕೆ ಬಿದ್ದು ಬದುಕಿದ್ದಳು. ಮಗು ಆಗ ತಾನೇ ಒಂದನೇ ಕ್ಲಾಸಿಗೆ ಸೇರಿತ್ತು. ಮಗ ಬಂದು ‘ಅಪ್ಪ ಎಲ್ಲಮ್ಮಾ?’ ಅಂತ ಕೇಳಿದಾಗ ಉತ್ತರ ಹೇಳಬೇಕಿ

ಅವ್ನನೆಲ್ಲಿ ಹೋಗ್ತಾನೆ, ಅಲ್ಲಿ ಗಣಪತಿ ಮಾಡೊ ಹತ್ರ ಇರ್ತಾನೆ!

ಇಮೇಜ್
ಆಗಾಗ ಬಾಲ್ಯ ಕಳ್ಳನಂತೆ ಕದ್ದು ನೋಡುತ್ತದೆಯಾದರೂ ಭೂಮಿಗೆ ಗಣೇಶ ಬರುತ್ತಾನೆ ಅನ್ನೊ ಈ ದಿನ ಈ ಗಣೇಶ ಬದಲೂ ಬಾಲ್ಯದ ಗಣೇಶನೇ ನನ್ನನ್ನು ನಡೆಸಿದಂತಿದೆ! ಇಲ್ಲಿ ಬಾಲ್ಯ ಬರೀ ಇಣುಕುವುದಿಲ್ಲ ಬದಲಿಗೆ ಆವರಿಸಿಕೊಳ್ಳುತ್ತದೆ. ಆರ್ಕೇಸ್ಟ್ರಾ, ಕುಣಿತ, ಚಂದಾ, ಕೋಮುಗಲಾಭೆ, ಅದ್ದೂರಿತನ ಯಾವುದೂ ನನಗೆ ಅರಿವಾಗದಷ್ಟು ಬಾಲ್ಯ ತುಂಬಿಕೊಳ್ಳುತ್ತದೆ. ಯಾರ್ಯಾರ ಪಾಲಿಗೆ ಗಣೇಶ ಏನಾಗಿ ಬರುತ್ತಾನೋ ನಾ ಅರಿಯೇ! ನನ್ನ ಪಾಲಿಗೆ ಗಣೇಶ ಬಾಲ್ಯದ ಐಕಾನ್. ಪ್ರತಿ ವರ್ಷ ನಾನು ಈ ದಿನವನ್ನು ಇಷ್ಟಪಡಲಿಕೆ ಇದೊಂದೇ ಕಾರಣ ನನಗೆ.  ಬಾಲ್ಯ ವೆಂದರೆ ಬಾಲ್ಯವೇ! ಅದು ಅಂದಿನ ಬಾಲ್ಯ. ಈಗಿನಂತೆ ಮೊಬೈಲ್ ಗೇಮ್, ಬರೀ ಹೋಂ ವರ್ಕ್ ಮಾಡುವಷ್ಟು ಆ ಬಾಲ್ಯ ಕೆಟ್ಟು ಹೋಗಿರಲಿಲ್ಲ. ಶಾಲೆಯ ಗಂಟೆ ಬಾರಿಸಿದಷ್ಟೇ ಸಾಕು ನಮಗೆ ಉಸೇನ್ ಬೋಲ್ಟ್ ನಾಚುವಂತೆ ಮತ್ತು ಶಾಲೆಯೇ ನಮ್ಮನ್ನು ಹಿಡಿಯಲು ಅಟ್ಟಿಸಿಕೊಂಡು ಬೆನ್ನತ್ತಿ ಬಂದಿದೆಯೇನೊ ಎನ್ನುವಂತೆ ಓಟ ಕೀಳುತ್ತಿದ್ದೇವು. ಮನೆಯ ಹೊರಗೆ ನಿಂತು ಪಾಟಿಗಂಟನ್ನು ಮನೆಯೊಳಗೆ ಎಸೆದು ಕಮ್ಮಾರ ಮನೆ ಮುಂದೆ ಹಾಜರ್! ನಾವು ಹೋದ ತಕ್ಷಣ ಅವರು ತಲೆನೋವೇ  ಬಂತೇನೊ ಅನ್ನುವಂತೆ ಕೋಪಿಸಿಕೊಳ್ಳುತ್ತಿದ್ದರು. ಅವರು ಕೆರೆಯಿಂದ ಮಣ್ಣು ತಂದು ಕೊನೆಯಲ್ಲಿ ಗಣೇಶನನ್ನು ಗಿರಾಕಿಗಳ ಕೈಗೆ ನೀಡುವವರೆಗಿನ ಪ್ರತಿದಿನದ ಹಾಜರಿ ಅಲ್ಲಿ ನಮ್ಮದು.  ಅದು ನಮ್ಮೂರ ಕಮ್ಮಾರ ಮನೆ. ಗಣಪತಿ ಮಾಡುವ ನಮ್ಮೂರಿನ ಏಕೈಕ ಮನೆ. ಒಂದು ತಿಂಗಳು ಮೊದ

ಕೆಂಪು ಪೆಪ್ಪರಮೆಂಟು ; ಬಾವುಟದ ನಂಟು!

ಇಮೇಜ್
ಹದಿನೈದು ಎಂಬುದರ ನೆಪದಲ್ಲಿ.... ಹೊರಗೆ ಹನಿ ಮಳೆ, ಅಮ್ಮ ಗದರಿದಕ್ಕಷ್ಟೆ ರಚ್ಚೆ ಹಿಡಿದು ಅತ್ತು ಕೊನೆಯಲ್ಲಿ ಉಳಿಯುವ ಹನುಕಲು ಕಣ್ಣೀರು ಎಳೆ ನಯನಗಳಲ್ಲಿ ಜಿನುಗುವಂತೆ!. ತಣ್ಣನೆ ತಂಪಿಗೆ ಸಂಪೂರ್ಣ ಮಾರಿಕೊಂಡ ಚುಮು ಚುಮು ಬೆಳಕಿನ ನಿದ್ದೆಯನ್ನು ಕೊಂಡು ಸರಾಗ ಉಸಿರಿನೊಂದಿಗೆ ಸವಿಯುತ್ತಿದ್ದೆ! ನನ್ನನ್ನು ಪಕಳೆ ಮೇಲಿನ ದುಂಬಿಯ ಕಾಲ್ಗುರಿತುಗಳ ಕಲೆಯನ್ನು ಮೃದುವಾಗಿ ತಡವುವಂತೆ ಕೆನ್ನ ಕೆನ್ನೆಗೆ ತಟ್ಟಿ ಅದೆಷ್ಟು ಬಾರಿ ಕಂದ ಕಂದ ಅಂದಿದ್ದಳೋ! ನಾನೇ ಎದ್ದು ಬಿಡಲಿ, ಯಾರೇ ಎಬ್ಬಿಸಲಿ, ಅವ್ವನೇ ಎಬ್ಬಿಸಲಿ ಕಡ್ಡಾಯ ನಿಯಮದಂತೆ ಅಳು ನನ್ನದು. ಅವ್ವನಿಗೆ ನನ್ನದು ನಿತ್ಯ ಇದೇ ಚಾಕರಿ. ತಾಯಿಗೆ ಆನಂದ ಪಡಲಿಕ್ಕೆ ಮತ್ತೊಂದು ಕಾರಣ. ಮಗನ ಅಳುವನ್ನು ಕಾಡಿಸಿ, ಮುದ್ದಿಸಿ, ಸಮಾಧಾನಿಸಿ, ಮನ್ನಿಸಿ, ನಗಿಸಿ ಗೆಲ್ಲುತ್ತಾಳೆ. ಆಗ ತಾನೇ ಹಿತ್ತಲ ಬೇಲೆಯಲ್ಲಿ ಅರಳಿದ ಹೂವನ್ನು ಕಿತ್ತುಕೊಟ್ಟು, ಹನಿಯುವ ಮಳೆಗೆ ಬೊಗಸೆಯಾಗುವಂತೆ ಕೈ ನೀಡಿಸಿ ಅಳು ಮರೆಸುತ್ತಿದ್ದಳು. ಅಂದು ಅಳುವಿನಲ್ಲೇ ಬಿಸಿ ನೀರಿನಲ್ಲಿ ಮಿಂದಿಸಿದ್ದಳು. ಅದೇನು ಆತುರವಿತ್ತೋ! ತಂಪಿಗೆ ವಿರುದ್ದವಾಗಿ ಹೋರಾಟಕ್ಕೆ ಬಿದ್ದಂತೆ ನನ್ನ ಮೈಯಿಂದ ಹೊಗೆ ಬರುತ್ತಿತ್ತು. ಒಂದು ಟವಲಷ್ಟೇ ಸುತ್ತಿಸಿ ‘ಜಿಜ್ಜಿಗೆ ಕೈ ಮುಗಿಯೋ ಕಂದ...!’ ಅವಳೇ ನನ್ನ ಕೈಗಳನ್ನು ಹಿಡಿದು ನಮಸ್ಕಾರ ಮಾಡಿಸಿದ್ದಳು. ಬಟ್ಟೆಯೇ ಬೇಡವಾಗದಷ್ಟು ಸ್ವಾರ್ಥಹೀನ ನಿಜ ಮನುಷ್ಯತ್ವದ ವಯಸ್ಸದು! ಅವ್ವ ಬಿಳಿ ಜಡ್ಡಿ, ಬಿಳಿ ಅ

ಹೊಟ್ಟೆಯಲ್ಲಿ ಮಗುವಿಟ್ಟುಕೊಂಡು ಇಟ್ಟಿಗೆ ಹೊತ್ತಳು!

ಇಮೇಜ್
ಹೊಸ್ತಿಲಾಚೆ ಬೆತ್ತಲೆ  08 ಬಹುಶಃ ಅವರ ಅಪ್ಪ ಅನ್ನೊನು ಅವನ ಪಾಲಿಗೆ ಎಂದೋ ಇಲ್ಲದಾಗಿದ್ದರೆ ಹಳ್ಳಿಯಲ್ಲಿ ಒಂದೊತ್ತು ಗಂಜಿಯೊಂದಿಗೆ ದಿನಗಳನಾದರೂ ತಳ್ಳುತ್ತಿದ್ದನೊ ಏನೊ! ಅವ್ವ  ಸತ್ತು ಹೋಗಿದ್ದು ನೆನಪಿಲ್ಲ. ಅವತ್ತಿಂದಲೇ ಅಥವಾ ಅದಕ್ಕಿಂತ ಮೊದಲೇ ಆತ ಕುಡಿಯಲು ಆರಂಭಿಸಿದ್ದ. ಅದೂ ಅಂತಿಂಥ ಕುಡಿತವಲ್ಲ. ಮಗನನ್ನು ಸ್ಕೂಲ್‍ನಿಂದ ಎಳೆತಂದು ಗಾರೆಯ ಕೆಲಸಕ್ಕೆ ಬಿಸಾಕಿ ಬಂದ ಹಣದಲ್ಲೂ ಕುಡಿದು ತೂರಾಡಿದ್ದ. ಇರುವ ಒಂದು ಸಣ್ಣ ಮನೆಯೂ ದೊಡ್ಡಪ್ಪ ಅನ್ನುವವನ ಪಾಲಾಗಿತ್ತು. ಬದುಕು ಆರಂಭವಾಗುವ ಮೊದಲೇ ಮುಗಿದು ಹೋಗಿತ್ತು. ಸಾಲದಕ್ಕೆ ಮೀಸೆ ಮೂಡಿದ್ದೊಂದೇ ನೆಪ ಮಾಡಿಕೊಂಡು ಅವನಿಗೊಂದು ಮದುವೆ ಮಾಡಿ ಬಿಸಾಕಿದ್ದನು ತಂದೆ! ಕುಡಿದು ಕುಡಿದು, ಕುಡಿದಿರುವ ಸ್ಥಿತಿಯಲ್ಲೇ ಆತ ಸತ್ತು ಹೋಗಿಬಿಟ್ಟ. ಕೆಲವು ತಂದೆ ತಾಯಿಗಳು ಮಕ್ಕಳಿಗೆ ಸಾಕಷ್ಟು ಆಸ್ತಿ ಮಾಡಿ ಸೋಮಾರಿಗಳನ್ನಾಗಿ ಮಾಡಿ ಹೋಗುತ್ತಾರೆ. ಕೆಲವರು ದುಡಿಯುವುದನ್ನು ಹೇಳಿಕೊಟ್ಟು ಹೋಗುತ್ತಾರೆ. ಕೆಲವರು ಎಲ್ಲಾ ಕಿತ್ತು ಬೆತ್ತಲೆ ಮಾಡಿ ನಡು ಬೀದಿಯಲ್ಲಿ ನಿಲ್ಲಿಸಿ ಹೋಗುತ್ತಾರೆ. ಮನೆಯಲ್ಲ. ಊರಲ್ಲೊಂದು ಆಶ್ರಯವಿಲ್ಲ. ಕೈಯಲ್ಲಿ ತಾನು ಕಲಿತ ಗಾರೆ ಕೆಲಸವೊಂದಿತ್ತು. ಪಕ್ಕದಲ್ಲಿ ನಂಬಿ ಬಂದ ಹೆಂಡತಿಯಿದ್ದಳು. ಕೈಲಾಗದವನಂತೆ ಹೆಂಡತಿಯನ್ನು ತವರಿಗೆ ಕಳಿಸಿ ತಾನೂ ಅಲ್ಲೇ ಹೋಗಿ ಜಾಂಡ ಊಡುವವನಲ್ಲ ಈತ. ಅವಳಿಗಾಗಿಯಾದರೂ ಆತ ಒಂದು ಕಡೆ ನಿಲ್ಲಬೇಕಾಗಿತ್ತು. ಒಂಚೂರು ನೆರಳು ಬೇಕಿತ್ತು. ಯಾ

ನಾವು ಜಸ್ಟ್ ಅವರ ಕಾಮಕ್ಕೆ ಹುಟ್ಟಿದವರಲ್ಲ!

ಇಮೇಜ್
ಅವರ ಕೆನ್ನೆಗೆ ಎತ್ತಿ ಬಾರಿಸಿದಂತೆ ‘ನನ್ನ ಹುಟ್ಸು ಅಂತ ನಾ ನಿಮಗೆ ಕೇಳಿಕೊಂಡಿದ್ನಾ?’ ಅಂದು ಬಿಡುತ್ತೇವೆ. how cruel we are! ಅವರ ಅಷ್ಟು ದಿನದ ಎಣಿಕೆಗಳನ್ನು, ಶ್ರಮಗಳನ್ನು ಜಸ್ಟ್ ಒಂದು ಮಾತಲ್ಲಿ ಜಾಡಿಸಿ ಒದ್ದಿರುತ್ತೇವೆ. ಅದು ಮನುಷ್ಯತ್ವವನ್ನು ಸಾಯಿಸಿಕೊಂಡವನ ಅಬ್ಬರ! ಇನ್ನೂ ಮುಂದುವರೆದು ‘ನನ್ನ ಹುಟ್ಟಿನಿಂದಲೇ ನೀವು ತಂದೆ, ತಾಯಿ ಅನ್ನಿಸಿಕೊಂಡಿರಿ’ ಅನ್ನುತ್ತಾನೆ. ಒಂದಲ್ಲ ಒಂದ್ಸರಿ, ಮಕ್ಕಳು ಅನ್ನಿಸಿಕೊಂಡವರು ತಂದೆ ತಾಯಿಗಳ ಮೇಲೆ ಈ ಪರಿ ಎಗರಿಬಿಟ್ಟಿರುತ್ತಾರೆ. ಯಾಕೋ ಗೊತ್ತಿಲ್ಲ ಒಂದು ಹಂತದಲ್ಲಿ ಮಕ್ಕಳು ಮತ್ತು ತಂದೆ ತಾಯಿಗಳ ಮಧ್ಯೆ ಈ ತರಹದೊಂದು ಮಾತುಕತೆ ನಡೆದಿರುತ್ತದೆ. ಹಿಂದು ಮುಂದಾದ ಪೀಳಿಗೆ, ಅಭಿರುಚಿಗಳು, ಮಗು ಸಾಗುವ ದಾರಿ, ತಂದೆ ತಾಯಿಗಳ ಒಂದಿಷ್ಟು ಬಿಗಿ ಹಿಡಿತ ಎಲ್ಲವೂ ಸೇರಿ ಈ ಮಟ್ಟಿನ ತಿರುಗು ಬೀಳುವಿಕೆ ನಡೆದಿರುತ್ತದೆ. ಮಕ್ಕಳು ಅನ್ನಿಸಿಕೊಂಡವರ ಬಳಿ ನನ್ನದೊಂದು ಮಾತಿದೆ! ನಾನೂ ಕೂಡ ಮಗನಾಗಿದ್ದವನು, ಅಪ್ಪನಾಗಿದವನು. ಎರಡೂ ಪ್ಲೇಸ್‍ಗಳಲ್ಲಿ ಕೂತು ಬದುಕು ಉಂಡುವನು. ಮಕ್ಕಳನೆಸಿಕೊಂಡ ಮಕ್ಕಳೇ ನೀವು ನಿಮ್ಮ ತಂದೆ ತಾಯಿಯರ ಕೇವಲ ಕಾಮದ ತೆವಲಿನ ಫಲ ಎಂಬುದನ್ನು ಎಂದಾದರೂ ಯೋಚಿಸಿದಿರೇನೋ!? ಒಂದು ಹುಡುಗಿ ಹೆಣ್ಣಾಗಿ ತಾಯಿಯಾಗುವ ಯಾತ್ರೆಯಲ್ಲಿನ ಅವಳೊಂದಿಗೆ ಇಂಚಿಂಚು ಚಿಗಿತುಕೊಂಡು ಬಂದಿರುವ, ಮುಂದೆ ಬರಲಿರುವ ಸಂತಾನದ ಬಗೆಗೆ ಅವಳ ಮನೋಯಾತ್ರೆಯನ್ನು ಗಮನಿಸಿಕೊಂಡಿರೇನೋ? ಅವಳ ಬದುಕಿನ ಬೃಹತ್ತಾ

ಅಮ್ಮನ ಹೆಣದ ಪಕ್ಕ ಕೂತು ಬಾಳೆ ಹಣ್ಣು ತಿಂದಿದ್ದೆ!

ಇಮೇಜ್
ಹೊಸ್ತಿಲಾಚೆ ಬೆತ್ತಲೆ  07 ಹತ್ತು ವರ್ಷಗಳಿಂದ ಊಟ ತಿಂಡಿಗಳ ಕೈಂಕರ್ಯವನ್ನು ಹೋಟೆಲ್‍ಗಳಲ್ಲೇ ಮುಗಿಸುತ್ತಾ ಬಂದಿರುವ ನಾನು ಹೋಟೆಲ್‍ನಲ್ಲಿ ಕೆಲಸ ಮಾಡುವ ಅದೆಷ್ಟು ಹುಡುಗರನ್ನು ನೋಡಿದ್ದೀನಿ. ಅವರ ಬಾಳನ್ನು ಹತ್ತಿರದಿಂದ ಕಂಡಿದ್ದೀನಿ. ಮನೆ ಬಿಟ್ಟು ಬಂದವರು, ತಪ್ಪಿಸಿಕೊಂಡವರು, ಕೆಲಸಕ್ಕೆಂದೆ ಎಳೆಸಿಕೊಂಡು ಬಂದವರು, ಮನೆಯಲ್ಲಿ ಊಟಕ್ಕಿಲ್ಲದೆ  ಹಸಿವಿಗೆ ಅಂತ ಬಂದವರು, ಮನೆಯಿಂದ ಓಡಿಸಿಕೊಂಡವರು, ಯಾರೂ ಇಲ್ಲದ ಪರದೇಶಿಗಳಂತವರು ಇವರು. ಇವ್ರೆಲ್ಲಾ ನಾವು ತಿಂದ ಎಂಜಲು, ಊಟದ ತಟ್ಟೆ ಲೋಟ ತೊಳೆಯುತ್ತಾರೆ. ನೀರಾಕಿ ಕೈಯಿಂದ ನೆಲ ಉಜ್ಜುತ್ತಾರೆ. ಹೋಟೆಲ್ ಯಜಮಾನನ ಏಟಿಗೆ ಬೆನ್ನು ಕೊಡುತ್ತಾರೆ. ರಾತ್ರಿ ಮೂಲೆಯಲ್ಲಿ ಈರುಳ್ಳಿ ಚೀಲವನ್ನು ಹಾಸಿಕೊಂಡು ಸೊಳ್ಳೆಗಳೊಂದಿಗೆ ಜಗಳಕ್ಕಿಳಿಯುತ್ತಾ ಬೆಳಗ್ಗೆಯಿಂದ ತುಂಬಿಕೊಂಡ ಸುಸ್ತು ಹೊದ್ದುಕೊಂಡು ಮಲಗಿಬಿಡುತ್ತಾರೆ. ಗಿರಾಕಿಗಳ ಬೈಗುಳ, ಯಜಮಾನನ ಉಗಿತ, ಸಾರ್ವಜನಿಕರ ತಿರಸ್ಕಾರದ ನೋಟ ಅವರನ್ನು ಕನಸಲ್ಲೂ ಕಾಡುತ್ತವೆ.   ಆ ಹುಡುಗರ ಬಗ್ಗೆ ನಂಗೆ ಅದೇನೋ ಕೂತೂಹಲ. ಸಮಯ ಸಿಕ್ಕಾಗ ಅವರೊಂದಿಗೆ ಮಾತಾಗುತ್ತೇನೆ. ನಗಿಸುತ್ತೇನೆ. ಒಂಚೂರು ಕಷ್ಟ ಎಂದವರಿಗೆ ಸಮಾಧಾನವಾಗುತ್ತೇನೆ. ಹೀಗೆ ಮೊನ್ನೆ ಸಿಕ್ಕ ಒಬ್ಬ ಹುಡುನ ಮಾತುಗಳು ಅಕ್ಷರಶಃ ನನ್ನನ್ನು ಬಹು ಕಾಡಿದವು. ಬದುಕು ಹೀಗೂ ಕೂಡ ಇದ್ಯಾ ಅಂತ ನನ್ನನ್ನು ನಾನು ಕೇಳಿಕೊಂಡಿ ಮತ್ತೆ ಮತ್ತೆ! ಅವನ ಮಾತುಗಳು ಹೀಗಿದ್ದವು. ‘ಅವತ್ತು ನಂಗೆ ಅದೇನು ಅಂತ

ಹೊಸ್ತಿಲಾಚೆ ಬೆತ್ತಲೆ 06

ಇಮೇಜ್
ಅವರನ್ನು ಹೊರಹಾಕಬೇಡ ಮಗಳೇ! ಮಗಳೇ,     ಈ ನಾಡಿನ ಪ್ರತಿಯೊಬ್ಬ ತಾಯಿಯರ ಪರವಾಗಿ ನಿನಗೊಂದು ಪತ್ರ ಬರೆಯುತ್ತಿದ್ದೇನೆ. ಮಗಳಾಗಿ ತಾಯಿಯಾಗಿ ಅಜ್ಜಿಯಾಗಿ ಈಗ ಈ ಅನಾಥಾಶ್ರಮದ ಬಂಧುವಾಗಿ ಉಳಿದುಕೊಂಡಿದ್ದೇನೆ. ಜೀವ ಉಳಿಸಿಕೊಂಡಿದ್ದೇನೆ. ಉಳಿಯಲೇ ಬೇಕಲ್ಲ ಮಗಳೇ!? ನೀ ಬಂದು ಮೊಮ್ಮಕ್ಕಳನ್ನು ಕರೆತಂದು‌ ಕಣ್ಣೀರು ಸುರಿಸುತ್ತೀಯಾ ನನ್ನ ಸ್ಥಿತಿಗೆ. ಅಣ್ಣನಿಗೆ ಹಿಡಿ ಶಾಪ ಹಾಕುತ್ತೀಯ. ಆದರೆ ಅದು ತರವಲ್ಲ ಮಗಳೇ ಇನ್ನೊಬ್ಬರಿಗೆ ಕೆಟ್ಟದ್ದು ಬಯಸಲು ನಾವ್ಯಾರು ಅಲ್ಲವೇ!? ಅವನು ನನ್ನ ಮಗ. ಅದೆಷ್ಟೋ ಹರಕೆಗಳ ಫಲ ಅವನು. ಅವನು ಚನ್ನಾಗಿರಬೇಕು, ಖುಷಿಯಾಗಿರಬೇಕು ಅಂತ ತಾನೇ ನಾನು ಮತ್ತು ನಿಮ್ಮ ಅಪ್ಪ ಹಗಲು ರಾತ್ರಿ‌ ದುಡಿದಿದ್ದು. ಬರೀ ಇಂಗ್ಲೀಷ್ ಲ್ಲೇ ಮುಳುಗಿಸಿದ್ದು, ದೊಡ್ಡ ದೊಡ್ಡ ಕಾಲೇಜಿನಲ್ಲಿ ಓದಿಸಿದ್ದು, ದೊಡ್ಡ ನೌಕರಿ ಹಿಡಿಯುವಂತೆ ಮಾಡಿದ್ದು. ಅವನನ್ನು ದುಡಿಯುವ, ಹಣ ಮಾಡುವ ಯಂತ್ರವಾಗಿ‌ ಮಾಡಿದ್ದು ನಾವೇ ಅಲ್ಲವೇ!? ಇಂದು ಅವನನ್ನು‌ ದೂರಿದರೆ ಫಲವೇನು!? ಮಗನನ್ನು ಬರೀ ಮಗನಂತೆ ಸಾಕಲೇ‌ ಇಲ್ಲ ಅನಿಸುತ್ತಿದೆ ಅದಕ್ಕೆಂದೇ ಅವನು ತಂದೆ ತಾಯಿಯರನ್ನು ತಂದೆ ತಾಯಿಯರಂತೆ ನೋಡಿಕೊಳ್ಳುತ್ತಿಲ್ಲವಾ!? ಗೊತ್ತಿಲ್ಲ. ಅಷ್ಟಕ್ಕೂ‌ ಗರಿಯೊಡೆದ ಪಕ್ಷಿಗೆ ಗೂಡಿನ ಹಂಗೇಕೆ ಅಲ್ಲವೇ!?  ಒಂದು ನೆನಪಿಡು ಮಗಳೇ ನಿನ್ನ ಮಕ್ಕಳನ್ನು ಕೇವಲ ಮಕ್ಕಳಂತೆ ಸಾಕು. ಅವರನ್ನು ಬೆಳೆಸುವ ಭರದಲ್ಲಿ‌ ನೀನು ನಿನ್ನ ಗಂಡ ಕಳೆದುಹೋಗಬೇಡಿ.  ಇನ್ನೊಂದು ಮ

ಸ್ವಾರ್ಥಿಯಾಗದ ಹೊರೆತು ನೀ ಏನನ್ನೂ ಕೂಡ ಕೊಡಲಾರೆ!

ಇಮೇಜ್
ಇದ್ಯಾವುದೋ ಹೊಸ ವರಸೆ ಎಂದು ಬೆಚ್ಚಿದಿರೇನು? ಹೌದು! ನಾನು ಹೇಳುವುದು ದಿಟ. ನಾವು ಸ್ವಾರ್ಥಿಗಳಾಗಬೇಕು, ನೀವೂ ಸ್ವಾರ್ಥಿಗಳಾಗಬೇಕು. ನಾವು ನೀವೆಲ್ಲಾ ಸ್ವಾರ್ಥಿಗಳಾಗದ ಹೊರೆತು ನಾವು ಬೇರೆಯವರಿಗೆ ಏನೂ ಕೂಡ ಕೊಡಲಾರೆವು. ನಾವು ಇದುವರೆಗೆ ಕೇಳಿಸಿಕೊಂಡಿದ್ದು, ಸಲಹೆÀ ನೀಡಿದ್ದು ‘ನಿಸ್ವಾರ್ಥಿಗಳಗಿ. ಪರರಿಗೆ ಮಿಡಿಯಿರಿ’ ಅಂದಲ್ಲವೇ!? ಒಂದು ನೆನಪಿಡಿ ಪರರಿಗಾಗಿ ಮಿಡಿಯಲು  ನಮ್ಮಲ್ಲೊಂದು ಚಿಕ್ಕ ತಂತಿಯಾದರೂ ಇರಬೇಕಲ್ಲವೇ? ಇರವ ತಂತಿಯಾದರೂ ಕಡಿದು ಹೋಗದಂತೆ ನೋಡಿಕೊಳ್ಳಬೇಕಲ್ಲವೇ? ಸ್ವಲ್ಪ ಮಟ್ಟಿಗೆ ಸ್ವಾರ್ಥ ಮತ್ತು ನಿಸ್ವಾರ್ಥದ ಕಲ್ಪನೆಗಳನ್ನು ನಮ್ಮ ಸಂಕುಚಿತ ವ್ಯಾಪ್ತಿಯಿಂದ ಆಚೆ ಕಳುಹಿಸಿ ದೂರದಿಂದ ನೋಡಿ, ಹೊರಗಿನಿಂದ ನೋಡಿ. ಸ್ವಾರ್ಥಿಯಾಗುವುದರ ಬಗ್ಗೆ ಹೇಳುತ್ತೇನೆ. ಯಾವುದು ಸ್ವಾರ್ಥ? ಅದಾಗುವುದು ಹೇಗೆ?ನಮಗೆ ನಮ್ಮ ಇರುವಿಕೆಯನ್ನು ಆನಂದಿಸುವುದು ಗೊತ್ತಿಲ್ಲ. ಪರಿಸರದೊಂದಿಗೆ ಬೆರೆತು ಹೋಗುವುದು ಗೊತ್ತಿಲ್ಲ. ನಮ್ಮೊಳಗೆ ನಮ್ಮನ್ನು ನಾವು ಹುಡುಕಿಕೊಳ್ಳುವುದು ಗೊತ್ತಿಲ್ಲ. ಸರಿಯಾಗಿ ಧ್ಯಾನಿಸುವುದು ಗೊತ್ತಿಲ್ಲ. ಅವು ಗೊತ್ತಿಲ್ಲದ ಆ ವಿಷಯಗಳಲ್ಲಿ ನಾವು ಇನ್ನೇನು ಪರರಿಗೆ ನೀಡಲು ಸಾಧ್ಯ? ಪರಿಸರದಲ್ಲಿ ಖುಷಿಯಿದೆ ಎಂದು ಹೇಗೆ ಹೇಳಬಲ್ಲರಿ, ಧ್ಯಾನದೊಳಗೆ ಖುಷಿಯಿದೆ ಹೇಗೆ ಹೇಳಬಲ್ಲರಿ, ನಮ್ಮೊಳಗೆ ನಾವು ಹೋದಾಗ ಸಿಗುವ ಒಂದು ದಿವ್ಯ ಆನಂದವನ್ನು ಅನುಭವಿಸದೇ ಬೇರೆವರಿಗೆ ಹೇಗೆ ಹೇಳಬಲ್ಲರಿ, ಮೊದಲು ನೀವು ಆದನ್ನು ಅನುಭವಿಸದ ಹೊರೆ

ಹೊಸ್ತಿಲಾಚೆಯ ಬೆತ್ತಲೆ 05

ಇಮೇಜ್
ಈ ಜಗತ್ತನ್ನು ನೀಡಿ ಹೊಟ್ಟೆಕಿಚ್ಚಾಗುತ್ತೆ ಸರ್!  ಸರ್ ನಾವು ಹೆಣ್ಣಾಗಿರುವ ತಪ್ಪಿಗೆ ಆಳ್ತಿವಾ? ನಾವು ಹೆಣ್ಣುಗಳು ಅಂತ ಮತ್ತೆ ಮತ್ತೆ ಅಳುಸ್ತಾನಾ ಆ ದೇವ್ರು ಗೊತ್ತಿಲ್ಲ. ಆದರೆ ಅದನ್ನು ಮೀರಿ ಕಣ್ಣೀರು ನಂಗೆ ಹ್ಯಾಬಿನೇ ಆಗಿಬಿಟ್ಟಿದೆ. ಬಲು ಬೇಗ ಬುದ್ದಿ ಬಂದು ಬಿಡಬಾರದು ಸರ್. ಏನೋ ಗೊತ್ತಿಲ್ಲ ನನ್ನ ತಂದೆ ತನ್ನ ಬುದ್ದಿನ ನನ್ನ ಕೈಯಲ್ಲಿಟ್ಟು ಹೊರಟು ಹೋದ್ರು ಅನಿಸುತ್ತೆ. ನಿತ್ಯ ಮಲಗುವಾಗ ಬದುಕಿಗೆ ನಾ ಸೋತೆ ಅಂತ ಹೇಳಿಕೊಂಡು ಮಲಗ್ತಿನಿ ; ಕೇಳಿಸಿಕೊಂಡ ಬದುಕಿಗೆ ಕರುಣೆ ಬಂದು ನಾಳೆಯಾದರೂ ನನ್ನ ಗೆಲ್ಲಿಸಲಿ ಅಂತ. ಇಲ್ಲ ಸರ್ ಯಾವತ್ತೂ ಗೆಲ್ಲಲ್ಲ ನಾನು. ನನ್ನ ವಯಸ್ಸಿನ ಹುಡುಗಿಯರು ಅದೆಷ್ಟು ಖುಷಿಯಾಗಿ ಲೈಫ್ನ ಸುಂದರವಾಗಿ ಕಳಿತಾರೆ. ಬಾಯ್ ಪ್ರೆಂಡ್, ಸಿನೆಮಾ, ಸಾಕುಯೆನಿಸುವವರೆಗೂ ಓದು, ಇಷ್ಟಪಟ್ಟ ಬಟ್ಟೆ ಎಲ್ಲವೂ ಸಿಗುತ್ತೆ. ಈ ಜಗತ್ತನ್ನು ಕಂಡು ಹೊಟ್ಟೆಕಿಚ್ಚಾಗುತ್ತೆ ಸರ್. ಅವರಿಗೆ ಇಷ್ಟವಾದಾಗ ಮದುವೆಯಂತದ್ದು ಮಾಡಿಕೊಂಡು ಲೈಫ್ನಲ್ಲಿ ಸೆಟ್ಲು ಕೂಡ  ಆಗಿ ಬಿಡ್ತಾರೆ.  ಆದರೆ ನಂಗೆ ಯಾಕೆ ಸರ್ ಹೀಗೆ? ಅಪ್ಪ ನನ್ನ ಬಿಟ್ಟು ಹೋದಾಗ ನನಗೆ ಹದಿನೆಂಟು. ಮಧ್ಯ ವಯಸ್ಸು ದಾಟಿದ ಅಮ್ಮ. ಬೆಂಗಳೂರು ಸೇರಿಕೊಂಡು ವರ್ಷವಾದರೂ ನೆನಪು ಮಾಡಿಕೊಳ್ಳದ ಅಣ್ಣ, ಉಳಿದಿರುವ ಹಳೆಯ ಸಾಲ. ಒಂಚೂರು ಚಂದ ಇದೀನಿ ಅನ್ನೋ ಕಾರಣಕ್ಕೆ ಒಂಟಿಯನ್ನೊ‌ ಕಾರಣಕ್ಕೆ ಎನ್ ಕ್ಯಾಶ್ ಗೆ ಕಾಯೋ ಗಂಡಸರು. ಸಾಸಿವೆ ಜೀರಿಗೆಯಿಂದ ಹಿಡಿದು ಕಿತ್ತು ಹೋದ

ನಿಮಗೇನು ಬೇಕೆಂದು ಅರಿಯದಷ್ಟು ದಡ್ಡನೇ ಸೃಷ್ಟಿಕರ್ತನು!

ಇಮೇಜ್
ಅರ್ಥವಿಲ್ಲದ ಪ್ರಾರ್ಥನೆಯ ಬಗ್ಗೆ ಒಂದು ಜಿಜ್ಞಾಸೆ ಅಷ್ಟೇ ಇಲ್ಲಿ! ನನ್ನ ಒಟ್ಟು ವಿಷಯ ಪ್ರಾರ್ಥನೆಯ ಬಗೆಗೆ ಅಷ್ಟೇ. ಅನೇಕ ಮಂದಿ ದೇವರೊಂದಿಗೆ ವೈಯಕ್ತಿವಾಗಿ ಜಗಳಕ್ಕಿಳಿದವರಂತೆ ಪರಿ ಪರಿಯಾಗಿ ಜೋರು ದನಿಯಲ್ಲಿ ಆತನೊಂದಿಗೆ ಮಾತಿಗಿಳಿದು ಬಿಡುತ್ತಾರೆ. ಇನ್ನು ಕೆಲವರು ಭಕ್ತಿಯ ಹಾಡಿನಿಂದ, ಕುಣಿತಗಳಿಂದ ದೇವರನ್ನು ಸಂತುಷ್ಟಗೊಳಿಸುವ ಹುನ್ನಾರು ಹೂಡಿರುತ್ತಾರೆ. ಇನ್ನೂ ಕೆಲವರು ಬೇಡವುದು ಅಷ್ಟೇ ಅಲ್ಲದೇ ಬಗಬಗೆಯ ಕಾಣಿಕೆಗಳೊಂದಿಗೆ ಮೇಲ್ಮನವಿಯನ್ನು ಸಲ್ಲಿಸುತ್ತಾರೆ. ಮತ್ತೇ ಕೆಲವರು ಧ್ವನಿವರ್ಧಕದಲ್ಲಿ ಊರಲ್ಲಿರುವವರ ಪರವಾಗಿ ಪ್ರಾರ್ಥನೆಗೆ ನಿಂತುಬಿಟ್ಟಿದ್ದೇವೆ ಅನ್ನುವ ಮಟ್ಟಿನ ರೇಜಿಗೆ ಒಳಗಾಗುತ್ತಾರೆ. ಇವೆಲ್ಲವೂ ನಾನು ಕಂಡು, ನೀವು ಕೂಡ ಕಂಡಿರುವ ಪ್ರಾರ್ಥನೆಯ ಹಲವು ಮುಖಗಳು. ಇಲ್ಲಿ ಪ್ರಾರ್ಥನೆಯನ್ನು ಅಲ್ಲಗಳೆಯುವ, ಮೂದಲಿಸುವ ಇರ್ಯಾದೆ ಖಂಡಿತ ನನ್ನದಲ್ಲ. ಪ್ರಾರ್ಥನೆಯ ಒಂದು ಜಿಜ್ಞಾಸೆ ಅಷ್ಟೇ! ಪ್ರಾರ್ಥನೆ ಮೂಲತಃ ಸಂಸ್ಕøತ ಪದ. ಅದರ ಅರ್ಥವಿಷ್ಟೇ. ನನ್ನಗಿಂತ ದೊಡ್ಡವನನ್ನು ಅಥವಾ ದೇವರನ್ನು ಬೇಡಿಕೊಳ್ಳುವ ಪರಿ. ಬೇಡಿಕೊಳ್ಳುವುದು ಅಂದರೆ ಅರ್ಥವಾಗಿರಬೇಕು ನಿಮಗೆ. ನಮ್ಮಲ್ಲಿ ಇರದಿರುವ ಅಥವಾ ಇರುವುದಕ್ಕಿಂತ ಹೆಚ್ಚು ಕೊಡು ಅನ್ನುವುದೇ ಆಗಿದೆ. ( ಪ್ರ=ವಿಶೇಷವಾಗಿ, ಅರ್ಥ್=ಪ್ರಯೋಜನವನ್ನು ಅಪೇಕ್ಷಿಸುವುದು) ಪ್ರಾರ್ಥನೆ ಅನ್ನುವುದು ಏನಾದರೂ ಉದ್ದೇಶವಿಟ್ಟುಕೊಂಡೆ ಮಾಡುವುದಾಗಿದೆ. ಅಂದರೆ ಎಲ್ಲಾ ಪ್ರಾರ್ಥನೆಗಳು ಸ್ವಾ

ಆಸೆಗೆ ಆರೋಗ್ಯ ಮಾರಾಟಕಿದ್ಯಾ?

ಇಮೇಜ್
ನಮ್ಮ ಮಗುವಿಗೆ ಒಂಚೂರು ಶೀತವಾದರೆ ಸಾಕು ಹಾಸ್ಪಿಟಲ್ ಗೆ ಹೊತ್ತುಕೊಂಡು ಓಡುತ್ತೇವೆ. ಆ ಮಗುವಿನ ದೇಹದಲ್ಲಿ ರಕ್ತದ ನಾಳಗಳೇ ಸಿಗದಿದ್ದರೂ ಹಿಂಡಿ ಹಿಂಡಿ ರಕ್ತ ಎಳೆದು ಹತ್ತು ಹಲವು ಪರೀಕ್ಷೆಗಳನ್ನು ಮಾಡಿ ಊಟಕ್ಕಿಂತ ಜಾಸ್ತಿಯೇ ಅನಿಸುವಷ್ಟು ಔಷಧಿ ಮಾತ್ರೆಗಳನ್ನು ಹೊತ್ತುಕೊಂಡು ಬರುತ್ತೇವೆ. ಮಕ್ಕಳೇ ಆಗಿರಬಹುದು, ದೊಡ್ಡವರೇ ಆಗಿರಬಹುದು ಇಂದು ಆರೋಗ್ಯವೆಂದರೆ ಅದು ಬಹುಪಾಲು ಆಸ್ಪತ್ರೆ, ಮಾತ್ರೆ, ಔಷಧಿಯೇ ಆಗಿದೆ.‌ ಒಂದು ಸಣ್ಣ ತಲೆನೋವು ಕೂಡ ಒಂದೆರಡು ಮಾತ್ರೆಗಳನ್ನು ಬಯಸುತ್ತದೆ.  ಬಹುಶಃ ಇಂದಿನ ಜನರೇಷನ್ ಗೆ ಗೊತ್ತಿಲ್ಲ ಅಂದುಕೊಳ್ಳುತ್ತೇನೆ. ನಾನು ಕೂಡ ಸೇರಿದಂತೆ ಆಗಿನ‌ ಕಾಲದಲ್ಲಿ ಈ ಶೀತ, ಕೆಮ್ಮು, ತಲೆನೋವುಗಳಿಗೆ ಯಾರೂ ತಲೆಕೆಡಿಸಿಕೊಂಡಿದ್ದು ನೆನಪಿಲ್ಲ. ಒಂದು ಕಪ್ ಶುಂಠಿ ಕಷಾಯ ಸಾಕು ಎಲ್ಲವನ್ನೂ ಸರಿಯಾಗಿಸುತ್ತದೆ ಅಂದುಕೊಂಡಿದ್ದರು. ಎಷ್ಟೋ ಬಾರಿ ಆಡುವಾಗ, ಓಡುವಾಗ ಬಿದ್ದು ತಲೆ ತೂತು ಬಿದ್ದರೆ ರಕ್ತ ಹರಿದು ಬಟ್ಟೆಯಲ್ಲಾ ಕೆಂಪಾಗಿದ್ದರೂ ತಲೆಗೆ ಕಾಫಿ ಪುಡಿ ತುರುಕಿ ರಕ್ತ ನಿಲ್ಲಿಸಿ ಏನೂ ಹಾಗೆಯೇ ಇಲ್ಲ ಅನ್ನುವ ರೀತಿ ಇರುತ್ತಿದ್ದರು. ಎರಡು ಮೂರು ದಿನಕ್ಕೆ ಆ ಗಾಯವೂ ಆ ನೋವು ಕೂಡ ಮರೆತು ಹೋಗುತ್ತಿತ್ತು. ಅವರಿಗೆ ಆರೋಗ್ಯದ ಬಗ್ಗೆ ಗಂಟೆಗಟ್ಟಲೇ ಭಾಷಣವಾಗಲಿ, ಪುಟಗಟ್ಟಲೇ ವಿವರಣೆಯಾಗಲಿ ಯಾರೂ ಕೊಡುತ್ತಿರಲಿಲ್ಲ. ಅವರಿಗೆ ಬೇಕು ಕೂಡ ಆಗಿರಲಿಲ್ಲ. ಆದರೂ ಅವರು ಅದೆಷ್ಟು ಬಲಿಷ್ಢವಾಗಿ ಆರೋಗ್ಯಯುತವಾಗಿ ಬದುಕುತ್ತಿದ್ದರ